Slide
Slide
Slide
previous arrow
next arrow

ಕಲಾವಿದ ಶರದ್’ಗೆ ಕರಕುಶಲ ಪ್ರಶಸ್ತಿ

300x250 AD

ಶಿರಸಿ: ಇಲ್ಲಿನ ಕರಕುಶಲ ಕಲಾವಿದ ಶರದ್ ಕಮಲಾಕರ ಬಜಗೋಳಿ ಅವರಿಗೆ ರಾಜ್ಯ ಸರಕಾರದ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ನೀಡುವ ರಾಜ್ಯ ಮಟ್ಟದ ಕರಕುಶಲ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪತ್ರ, ಫಲಕ ಹಾಗೂ 50 ಸಾವಿರ ರೂಪಾಯಿ ನಗದು ಒಳಗೊಂಡ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಲಾಯಿತು.ಹುಲ್ಲಿನಿಂದ ವಿವಿಧ ಕಲಾಕೃತಿ‌ಗಮನ ಸೆಳೆದ ಶರದ್ ಗಲಗ ಎಂಬ ಜಾತಿಯ ಹುಲ್ಲಿನಿಂದ ಇಂಗ್ಲೆಂಡ್ ಪಾರ್ಲಿಮೆಂಟ್ ಪ್ರತಿಕೃತಿ ರಚಿಸಿ ಗಮನ ಸೆಳೆದಿರುವದೂ ವಿಶೇಷ. ಇದೇ ಕಾರಣಕ್ಕೆ ನಿಗಮ ರಾಜ್ಯ‌ ಪ್ರಶಸ್ತಿ ಪ್ರಕಟಿಸಿದೆ.
ಈ ವೇಳೆ ವ್ಯವಸ್ಥಾಪಕ ನಿರ್ದೇಶಕ ಡಾ. ಜಿ.ವಿಶ್ವನಾಥ, ಪ್ರಧಾನ ವ್ಯವಸ್ಥಾಪಕ ಜಿ.ನಾಗೇಂದ್ರಪ್ಪ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ನಾಸೀರ್ ಇತರರು ಇದ್ದರು. ಶರದ್ ಎಸ್ ಬಿಐ ಬ್ಯಾಂಕ್ ಉದ್ಯೋಗಿಯಾಗಿದ್ದಾರೆ.

300x250 AD
Share This
300x250 AD
300x250 AD
300x250 AD
Back to top